``ಶ್ರೀ ಹರಿ ಲೀಲಾರ್ಣವ`` ಯಕ್ಷಗಾನ ಪ್ರಸಂಗ ಬಿಡುಗಡೆ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಮ೦ಗಳವಾರ, ಆಗಸ್ಟ್ 4 , 2015
|
ಆಗಸ್ಟ್ 4, 2015
|
``ಶ್ರೀ ಹರಿ ಲೀಲಾರ್ಣವ`` ಯಕ್ಷಗಾನ ಪ್ರಸಂಗ ಬಿಡುಗಡೆ
ಶಿರ್ವ :
ಅಗರಿ ಭಾಸ್ಕರ ರಾವ್ ವಿರಚಿತ ಶ್ರೀ ಹರಿ ಲೀಲಾರ್ಣವ (ಶ್ರೀ ಮಹಾಲಸಾ ನಾರಾಯಣೀ ಕಥಾವೈಭವ) ಯಕ್ಷಗಾನ ಪ್ರಸಂಗದ ಬಿಡುಗಡೆ ಸಮಾರಂಭವು ಶಿರ್ವ ಕಾಶಿಮಠ ಶ್ರೀ ಮಹಾಲಸಾ ನಾರಾಯಣೀ ದೇವಸ್ಥಾನದಲ್ಲಿ ಜು.31ರಂದು ನಡೆಯಿತು.
ಸರಳ ಸಮಾರಂಭದಲ್ಲಿ ಶ್ರೀಮಹಾಲಸಾ ದೇವಿಯ ಸಮ್ಮುಖದಲ್ಲಿ ಪ್ರಾಧ್ಯಾಪಕ ಡಾ| ಪಾದೆಕಲ್ಲು ವಿಷ್ಣು ಭಟ್ ಅವರು ಯಕ್ಷಗಾನ ಪ್ರಸಂಗವನ್ನು ಬಿಡುಗಡೆ ಮಾಡಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಪ್ರಸಂಗಕತೃ ಅಗರಿಭಾಸ್ಕರರಾವ್ ಅವರನ್ನು ಶ್ರೀ ಮಹಾಲಸಾ ನಾರಾಯಣೀ ದೇವಸ್ಥಾನದ ಆಡಳಿತ ಮಂಡಳಿ ಕಾರ್ಯದರ್ಶಿ ಚಿದಾನಂದ ಪೈಹಾಗೂ ಶ್ರೀ ದೇವಳದ ಅರ್ಚಕ ರಘುರಾಮ ಶೆಣೈ ಯವರು ಶಾಲು ಹೊದಿಸಿ ಫಲ ಪುಷ್ಪ,ದೇವರ ಪ್ರಸಾದ ನೀಡಿ ಸಮ್ಮಾನಿಸಿದರು.
ಈ ಸಂದರ್ಭದಲ್ಲಿ ಶ್ರೀ ದೇವಳದ ಆಡಳಿತ ಮಂಡಳಿ ಸದಸ್ಯರಾದ ಸತ್ಯನಾರಾಯಣ ನಾಯಕ್, ಸಾಲಿಗ್ರಾಮ ಮೇಳದ ವ್ಯವಸ್ಥಾಪಕರಾದ ಪಿ. ಕಿಶನ್ ಹೆಗ್ಡೆ , ಪ್ರೊ. ಎಸ್.ವಿ. ಉದಯ ಕುಮಾರ್ ಶೆಟ್ಟಿ, , ತೇಜೇಶ್ವರ ರಾವ್, ಕದಂಬ ಪ್ರಶಸ್ತಿ ವಿಜೇತ ಸಮಾಜ ಸೇವಕ ಜಿ. ವಸಂತ ಶೆಣೈ ಮತ್ತಿತರರು ಉಪಸ್ಥಿತರಿದ್ದರು.
ಕೃಪೆ :
udayavani
|
|
|